Thursday, April 15, 2010

ಒಂದು ಒಳ್ಳೆ ಕಾರ್ಟೂನು



ಮಿತ್ರ ದಿನೇಶ್ ಕುಕ್ಕುಜಡ್ಕ ತುಂಬ ಒಳ್ಳೆಯ ವ್ಯಂಗ್ಯಚಿತ್ರವೊಂದನ್ನು ಬರೆದು ಕಳುಹಿಸಿದ್ದಾನೆ. ಇದಕ್ಕೆ
‘ಗಡಿ ದಾಟಿದ ಪ್ರೀತಿಯ ಕುಡಿ,
ಅದನ್ನೂ ಬಿಡದ ದ್ವೇಷದ ಕಿಡಿ’

ಎಂದೆಲ್ಲ ಹೆಡ್ಡಿಂಗ್ ಕೊಟ್ಟು ನಿಮ್ಮ ತಲೆ ತಿನ್ನಲು ಮನಸ್ಸಾಗುತ್ತಿದೆ. ಅದೆಲ್ಲ ಬೇಡ, ಚಿತ್ರ ಚೆನ್ನಾಗಿದೆ. ನಿಮ್ಮ ಅವಗಾಹನೆಗೆ:

Friday, April 9, 2010

ತಂಪಾಗೋಣ ಬನ್ನಿ







ನನ್ನ ಆತ್ಮೀಯ ಮಿತ್ರ, ಹಿರಿಯ ಸಹೋದ್ಯೋಗಿ ರಾಧಾಕೃಷ್ಣ ಭಡ್ತಿ ಅವರ ಐದು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿವೆ. ನೀರಿನ ಕುರಿತು ಐದಾರು ವರ್ಷಗಳಿಂದ ಬರೆಯುತ್ತ ಬಂದ ಅಂಕಣ ಬರಹಗಳಿವು. ಅವರು ಬಹುಶಃ ನೀರಿನ ಕುರಿತು ಯೋಚಿಸಿದಷ್ಟು ಬೀರಿನ ಕುರಿತು ಯೋಚಿಸಿರಲಿಕ್ಕಿಲ್ಲ. ಈ ಸುಡು ಬೇಸಿಗೆಯಲ್ಲಿ ನೀರಿನ ಬಗ್ಗೆ ಮಾತನಾಡುವುದು, ಕೇಳುವುದು ತಂಪು ತಂಪು.
ಹಾಗೇ ಗೆಳೆಯ ಅಪಾರ ರಚಿಸಿದ ಸೊಗಸಾದ ಮುಖಪುಟಗಳನ್ನು ನೋಡುವುದು ಕೂಡ.
ಗಾಯನ ಸಮಾಜದ ಎದುರಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೧ ಗಂಟೆಗೆ ಸಮಾರಂಭ. ನೀರೆಚ್ಚರದ ಪುಸ್ತಕಗಳು, ನೀರು, ಹಸಿರು ಪತ್ರಕರ್ತರಾದ ಶ್ರೀಪಡ್ರೆ, ನಾಗೇಶ್ ಹೆಗಡೆ ಮುಂತಾದವರ ಉಪಸ್ಥಿತಿ. ಎಲ್ಲ ನೀರುಮಯ.
ವಿ.ಸೂ.: ಬೆಳಗ್ಗೆ ತಿಂಡಿಯಿದೆ. ಆದ್ರೆ ನೀರು ದೋಸೆ, ವಾಟರ್ ಮೆಲನ್ ಜ್ಯೂಸ್ ಸಿಗುತ್ತದೆ ಅಂದ್ಕೋಬೇಡಿ ಮತ್ತೆ !