Friday, July 11, 2008

ದಿನೇಶ ಕಂಡ ಹಣದುಬ್ಬರ


ನಾವೆಲ್ಲಾ ಊರು ಬಿಟ್ಟೆವು. ತುತ್ತು ಕೂಳಿಗಾಗಿ, ಹಣಕ್ಕಾಗಿ, ಸೂರಿಗಾಗಿ. ನನ್ನ ಗೆಳೆಯ ದಿನೇಶ್ ಕುಕ್ಕುಜಡ್ಕ ಮಾತ್ರ ಬಿಡಲಿಲ್ಲ.
ನಾನು ಬಿಟ್ಟುಬಂದ ಬಂಟಮಲೆಯ ತಪ್ಪಲಿನ ಕುಕ್ಕುಜಡ್ಕ ಎಂಬ ಪುಟ್ಟ ಊರಿನಲ್ಲೇ ಉಳಿದು, ಜಗತ್ತಿನ ಅತ್ಯುತ್ತಮ ಸಾಹಿತಿಗಳನ್ನೂ ಅತಿಶ್ರೇಷ್ಠ ಚಿತ್ರಕಾರರನ್ನೂ ಅದು ಹೇಗೋ ಮುಖಾಮುಖಿಯಾಗುತ್ತ, ಸಮಕಾಲೀನ ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ತನ್ನ ವ್ಯಂಗ್ಯಚಿತ್ರಗಳ ಮೂಲಕ ನೀಡುತ್ತ ಬರುತ್ತಿದ್ದಾನೆ. ಆತ ಈಗ ಕೊಡಗಿನ ‘ಶಕ್ತಿ’ ಪತ್ರಿಕೆಯ ವ್ಯಂಗ್ಯಚಿತ್ರ ಕಲಾವಿದ.
ನನ್ನ ಭವಿಷ್ಯ ನನ್ನ ಗೆರೆಗಳಲ್ಲಿಯೇ ಇದೆ ಎಂದು ನಂಬಿರುವ ದಿನೇಶ, ಊರಿನ ಭ್ರಷ್ಟರನ್ನು ಎದುರು ಹಾಕಿಕೊಳ್ಳಲೂ ಅಂಜಿದವನಲ್ಲ. ಆತ ಮೊನ್ನೆ ಮೊನ್ನೆ ಬರೆದ ಈ ಕಾರ್ಟೂನನ್ನು ನೋಡಿದಾಗ ಅದರ ಹಿಂದಿನ ಕರಾಳ ವ್ಯಂಗ್ಯ ಕಂಡು ಮೈ ಜುಮ್ಮೆಂದಿತು.
ನೀವೂ ನೋಡಿದರೆ ಚೆನ್ನಾಗಿರ್‍ತುತದೆಂದು ಬ್ಲಾಗಿಸಿದ್ದೇನೆ.

4 comments:

Anonymous said...

Good
- Supreeth

Anonymous said...

chennagide. Shakthiyalli prakatavaguva avra cartoongalu hage.
-Ratan chengappa

mruganayanee said...

hmhhh... ನಿಜ್ವಾಗ್ಲೂ ಹಾಗನ್ಸುತ್ತೆ ....

Anonymous said...

Thanks
supreeth, ratan, malnad hudgi !
- Harish kera