Thursday, August 6, 2009

ಅಡಿಗ ಮತ್ತು ಇಂಗ್ಲಿಷ್ ಸಾಹಿತ್ಯ


“ಮಂಗಳೂರು, ಭಾರತದ ಕರಾವಳಿಯ ಪಟ್ಟಣ. ಅಲ್ಲಿ ನಾನು ಸುಮಾರು ೧೬ ವರ್ಷ ವಯಸ್ಸಾಗುವವರೆಗೆ ಇದ್ದೆ. ಈಗ ಅದು ಮಾಲ್‌ಗಳು, ಕಾಲ್‌ಸೆಂಟರ್‌ಗಳಿಂದ ತುಂಬಿರುವ ಬೆಳೆದ ನಗರವಾಗಿದೆ. ೧೯೮೦ರ ದಶಕದಲ್ಲಿ ಅದು ಸಮಾಜವಾದಿ ದೇಶವೊಂದರ ದೇಸೀ ಮಾದರಿಯ ಪೇಟೆಯಾಗಿತ್ತು. ಪುಸ್ತಕಗಳು ಅಂದು ದುಬಾರಿಯೆನಿಸಿದ್ದವು. ಕೊಂಡುಕೊಳ್ಳುವವರು ಕಡಿಮೆ ಇದ್ದರು. ನಾವು ಸರ್ಕ್ಯುಲೇಟಿಂಗ್ ಲೈಬ್ರರಿಗಳಿಗೆ ಸೇರಿ ಪುಸ್ತಕ ತಂದು ಓದುತ್ತಿದ್ದೆವು- ಹದಿನೈದು ದಿನಕ್ಕೊಂದು ಕಾದಂಬರಿಗೆ ಎರಡು ರೂಪಾಯಿ, ಕಾಮಿಕ್ಸ್‌ಗೆ ೫೦ ಪೈಸೆ ಬಾಡಿಗೆ."

“ದೇಶಭಕ್ತಿಯ ಚರ್ಚೆಗಳು ನನ್ನ ತಲೆಮಾರಿಗಾಗಲೇ ಅಪ್ರಸ್ತುತವಾಗಿದ್ದವು. ನನ್ನ ಅಜ್ಜಂದಿರು ಹೇಳುತ್ತಿದ್ದ ‘ಕಿಂಗ್ಸ್ ಇಂಗ್ಲಿಷ್’ ನಮ್ಮ ಮಟ್ಟಿಗೆ ‘ನೆಹರೂ ಇಂಗ್ಲಿಷ್’ ಆಗಿತ್ತು. ೧೯೪೭ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರಧಾನಿ ಮಾಡಿದ ಭಾಷಣದ ‘ವಿಯ ಜತೆ ಒಪ್ಪಂದ’, ಗಾಂಜಿ ಅವರ ಹತ್ಯೆಯಾದಾಗ ಅವರು ನುಡಿದ ‘ನಮ್ಮ ಜೀವನಗಳಿಂದ ಬೆಳಕು ಹೊರಟುಹೋಗಿದೆ’- ಇತ್ಯಾದಿಗಳು ಅಲ್ಲಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿ, ರೇಡಿಯೋಗಳಲ್ಲಿ, ಪತ್ರಿಕೆಗಳಲ್ಲಿ ತುಣುಕು ತುಣುಕಾಗಿ ಕಣ್ಣಿಗೆ ಬೀಳುತ್ತಿದ್ದವು."

“ದಕ್ಷಿಣ ಭಾರತೀಯ ಭಾಷೆಯಾದ ಕನ್ನಡ, ಭಾರತೀಯ ಪದಗಳಲ್ಲಿ ಹೇಳುವುದಾದರೆ ನನ್ನ ‘ಮಾತೃಭಾಷೆ’ (ಅಂದರೆ ಸಾಮಾನ್ಯವಾಗಿ ತಂದೆ ಮಾತನಾಡುತ್ತಿದ್ದ ಭಾಷೆ), ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಸೃಜಿಸಿದೆ. ಆದರೆ ಅದರ ಕವಿಗಳು ಹಾಗೂ ಸಾಹಿತಿಗಳಲ್ಲಿ ನನ್ನನ್ನು ಪ್ರಭಾವಿಸಿದವರು ಒಬ್ಬರು ಮಾತ್ರ- ಯು.ಆರ್.ಅನಂತಮೂರ್ತಿ (ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು). ಅದೂ ಕೂಡ ಅವರ ಒಂದು ಕಾದಂಬರಿ ಸಿನೆಮಾ ಆಗಿದೆ ಎಬ ಕಾರಣದಿಂದ. ನನ್ನ ಹೈಸ್ಕೂಲ್ ಸಹಪಾಠಿಗಳಲ್ಲಿ ತರಗತಿಯಿಂದ ಆಚೆಗೆ ಕನ್ನಡ ಪುಸ್ತಕ ಓದುತ್ತಿದ್ದವರು ಅಪರೂಪ. ಅಲ್ಲಿ ನಮಗೆ ಒತ್ತಾಯದಿಂದ ಪದ್ಯ ಹಾಗೂ ಗದ್ಯದ ತುಣುಕುಗಳನ್ನು ಜೀವವೇ ಇಲ್ಲದ ನೀರಸ ರೀತಿಯಲ್ಲಿ, ೮೦ರ ದಶಕದ ಟಿಪಿಕಲ್ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕಲಿಸಲಾಗುತ್ತಿತ್ತು. ನಮ್ಮನ್ನು ಸೆಳೆಯುತ್ತಿದ್ದ ಆಕರ್ಷಕ ಬರಹಗಳೆಲ್ಲ ಇಂಗ್ಲಿಷ್‌ನಲ್ಲಿದ್ದವು."

‘ಬಿಳಿ ಹುಲಿ’ಗೆ ಬೂಕರ್ ಪ್ರಶಸ್ತಿ ಪಡೆದ ಅರವಿಂದ್ ಅಡಿಗ ಈ ಬಾರಿ ‘ಬಿಟ್ವೀನ್ ದಿ ಅಸಾಸಿನೇಶನ್ಸ್’ ಎನ್ನುತ್ತ ಪ್ರತ್ಯಕ್ಷರಾಗಿದ್ದಾರೆ. ಇದು ೧೯೮೪ರಲ್ಲಿ ನಡೆದ ಇಂದಿರಾ ಗಾಂ ಹತ್ಯೆ ಹಾಗೂ ೧೯೯೧ರಲ್ಲಿ ನಡೆದ ರಾಜೀವ್ ಗಾಂ ಕಗ್ಗೊಲೆಗಳ ನಡುವಿನ ಕಾಲದಲ್ಲಿ ‘ಕಿತ್ತೂರು’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕತೆಗಳ ಸಂಕಲನ.

ಮಂಗಳೂರಿನ ಪರಿಸರ-ಬಾಲ್ಯ- ಸಾಹಿತ್ಯ ಪ್ರೇರಣೆ ಇತ್ಯಾದಿಗಳ ಬಗ್ಗೆ ಅವರು ಬರೆದುಕೊಂಡ ‘ಇಂಗ್ಲಿಷ್ ಸಾಹಿತ್ಯ ನನ್ನನ್ನು ಹೇಗೆ ರೂಪಿಸಿತು ?’ ಎಂಬ ಲೇಖನದಿಂದ ಆಯ್ದ ಭಾಗಗಳಿವು. ಇಡೀ ಲೇಖನ ಓದಬೇಕಾದರೆ ಇಲ್ಲಿದೆ : http://www.independent.co.uk/arts-entertainment/books/features/aravind-adiga-how-english-literature-shaped-me-1749429.html

5 comments:

Unknown said...

adigaru mattte matte barutirali.....sahayaatriyali viharisi omme

Anonymous said...

wah!
monne ratri kootu e lekhanavannu odide.nanna blogige yathavattu hakibidona antha yochne madide. neeve a kelsa madidri.
adiga barah nange tumba ishtavayitu.
-alemari

ಪ್ರಿಯಾ ಕೆರ್ವಾಶೆ said...

what next dear?

beluru said...

Dear Harish Kera,
saw ur article in VK today on western Ghats.
FYI, I had written the article on the same subject in my website few weeks back. Please have a look:
http://mitramaadhyama.co.in/?p=1300

ಹರೀಶ್ ಕೇರ said...

Thank you, Beluru.
I read it.
it's nice.
And other writings also.
- Harish Kera