Friday, April 9, 2010
ತಂಪಾಗೋಣ ಬನ್ನಿ
ನನ್ನ ಆತ್ಮೀಯ ಮಿತ್ರ, ಹಿರಿಯ ಸಹೋದ್ಯೋಗಿ ರಾಧಾಕೃಷ್ಣ ಭಡ್ತಿ ಅವರ ಐದು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿವೆ. ನೀರಿನ ಕುರಿತು ಐದಾರು ವರ್ಷಗಳಿಂದ ಬರೆಯುತ್ತ ಬಂದ ಅಂಕಣ ಬರಹಗಳಿವು. ಅವರು ಬಹುಶಃ ನೀರಿನ ಕುರಿತು ಯೋಚಿಸಿದಷ್ಟು ಬೀರಿನ ಕುರಿತು ಯೋಚಿಸಿರಲಿಕ್ಕಿಲ್ಲ. ಈ ಸುಡು ಬೇಸಿಗೆಯಲ್ಲಿ ನೀರಿನ ಬಗ್ಗೆ ಮಾತನಾಡುವುದು, ಕೇಳುವುದು ತಂಪು ತಂಪು.
ಹಾಗೇ ಗೆಳೆಯ ಅಪಾರ ರಚಿಸಿದ ಸೊಗಸಾದ ಮುಖಪುಟಗಳನ್ನು ನೋಡುವುದು ಕೂಡ.
ಗಾಯನ ಸಮಾಜದ ಎದುರಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೧ ಗಂಟೆಗೆ ಸಮಾರಂಭ. ನೀರೆಚ್ಚರದ ಪುಸ್ತಕಗಳು, ನೀರು, ಹಸಿರು ಪತ್ರಕರ್ತರಾದ ಶ್ರೀಪಡ್ರೆ, ನಾಗೇಶ್ ಹೆಗಡೆ ಮುಂತಾದವರ ಉಪಸ್ಥಿತಿ. ಎಲ್ಲ ನೀರುಮಯ.
ವಿ.ಸೂ.: ಬೆಳಗ್ಗೆ ತಿಂಡಿಯಿದೆ. ಆದ್ರೆ ನೀರು ದೋಸೆ, ವಾಟರ್ ಮೆಲನ್ ಜ್ಯೂಸ್ ಸಿಗುತ್ತದೆ ಅಂದ್ಕೋಬೇಡಿ ಮತ್ತೆ !
Subscribe to:
Post Comments (Atom)
No comments:
Post a Comment